ಬದಲಾಗು ಮನುಜ ಉದಯಿಸಲೇನು ಚಂದ್ರ ಮುಳುಗಲೇನು ಆ ಸೂರ್ಯ ಮುಗಿಲತ್ತು ನಗುವುದೇ..? ಮತ್ತೆ ಬರದಿರಿ ಎನ್ನುವುದೇ.? ಹೊತ್ತೊತ್ತಿಗೆ ತುತ್ತು ನಿಲ್ಲುವುದೇ ದುಡಿವ ಕೈಗಳು ಸೋಲುವವೇ ಹುಟ್ಟು ಸಾವು ನಿಲುವುದೇ? ತ್ರಿಕಾಲಗಳು ಬದಲಾಗುವುದೇ..? ಸ್ವಾರ್ಥದೊಳಗ ಬದುಕುವ ಏ ಮನುಜ ನೀ ಬದಲಾಗು ನಿನ ದುರಾಡಳಿತಕ್ಕೆ ನಲುಗಿ ನರಾಳಡುತ್ತಿದೆ ಈ ಜಗ. ಭೂತಾಯಿಯ ಒಡಲು ಬಗೆದು ಎದೆಯುಬ್ಬಿಸಿ ನಗುವ ಮನುಜ ನಿನ ಸಾಮಾಧಿಗೆ ನೀನೇ ಮಾಡಿಕೊಂಡಿರುವೆ ದಾರಿ ಬದಲಾಗದಿದ್ದರೆ ಯಾರಿಗಿಲ್ಲ ಈ ಜಾಗ ಮೊದಲು ತಿಳಿ ಡಾ.ಅನಪು ಜೀವನ.. #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #ಕವನ #yqbabakannada