Nojoto: Largest Storytelling Platform

ಸುಭಾಷ್ ಚಂದ್ರ ಬೋಸ್ ಸಾಕು ಸಾಕಾಗಿದೆ ಮಂದಗಾಮಿಗಳ ಸಹವಾಸ..

ಸುಭಾಷ್ ಚಂದ್ರ ಬೋಸ್

ಸಾಕು ಸಾಕಾಗಿದೆ ಮಂದಗಾಮಿಗಳ
ಸಹವಾಸ....ಉಪವಾಸ ಸತ್ಯಾಗ್ರಹಗಳ 
ಗೋಗರೆಯುವ ಶಾಂತಿ ಸಂಧಾನದ ನಾಟಕ....
ಇನ್ನೂ ಹೆಚ್ಚು ದಿವಸ ಕಾಯಿಸಲಾರೆನು 
ತಾಯಿ ಭಾರತಿಯನ್ನು ಬಂಧನ ಮುಕ್ತಗೊಳಿಸಲು.....

ಶಾಂತಿಯಿಂದ ಸ್ವರಾಜ್ಯ ಸಿಗುವುದೆಂಬ 
ಭ್ರಮೆಯಿಂದ ಹೊರಬರದ ಹೊರತು...
ನವ ತರುಣರಲ್ಲಿ ಸ್ವಾತಂತ್ರ್ಯದ
ಕಿಡಿಯ ಕಿಚ್ಚು ಹಚ್ಚಿಸದ ಹೊರತು.. 
ಪರಂಗಿಗಳಿಗೆ ಫಿರಂಗಿಯ ಗುಂಡುಗಳ
ಮೂಲಕ ಉತ್ತರ ನೀಡದ ಹೊರತು... 
ಇನ್ನೆಲ್ಲಿ ದಕ್ಕೀತು ನಿಮಗೆ ಸ್ವಾತಂತ್ರ್ಯ??

ನೀಡುವೆನು ನಿಮಗೆ ಬಿಸಿ ರಕ್ತದ ವಾಗ್ದಾನ...
ಸ್ವರಾಜ್ಯಕ್ಕಾಗಿ ಕೊಡಿ ನಿಮ್ಮ ಬಿಸಿಯ ನೆತ್ತರ...
ಕೊಂಡೊಯ್ಯುವೆನು  ಭಾರತಾಂಬೆಯ ಧ್ವಜವನು
ಮುಗಿಲೆತ್ತರ...ಸ್ವತಂತ್ರದ ಹತ್ತಿರ..ಹತ್ತಿರ..

ಸ್ವರಾಜ್ಯಕ್ಕಾಗಿ ಮೊಳಗಿತು ಕ್ರಾಂತಿಯ ಕಹಳೆ
ದೇಶದಲ್ಲೆಡೆ ಪಸರಿಸಿತು ಹೋರಾಟದ ಜ್ವಾಲೆ..
ರಾಷ್ಟ್ರೀಯ ಸೇನೆ ಸೇರಲು ತರುಣರ ತವಕ
ಬಿಳಿ ಮೊಗದ ಪರಂಗಿಗಳಿಗೆ ಹೆಚ್ಚಾಯ್ತು ನಡುಕ
ಜೈ ಹಿಂದ್... ಇಕ್ವಿಲಾಬ್ ಜಿಂದಾಬಾದ್..
ಶಾಂತಿಯಿಂದ ಕ್ರಾಂತಿಯೆಡೆಗೆ ಹೊಸ ಮನ್ವಂತರದ
ಹಾದಿಯಲ್ಲಿ ವೇಗವಾಗಿ ಸಾಗಿತು ಸ್ವತಂತ್ರ ಭಾರತ... Subhash Chandra Bose
ಸುಭಾಷ್ ಚಂದ್ರ ಬೋಸ್

ಸಾಕು ಸಾಕಾಗಿದೆ ಮಂದಗಾಮಿಗಳ
ಸಹವಾಸ....ಉಪವಾಸ ಸತ್ಯಾಗ್ರಹಗಳ 
ಗೋಗರೆಯುವ ಶಾಂತಿ ಸಂಧಾನದ ನಾಟಕ....
ಇನ್ನೂ ಹೆಚ್ಚು ದಿವಸ ಕಾಯಿಸಲಾರೆನು 
ತಾಯಿ ಭಾರತಿಯನ್ನು ಬಂಧನ ಮುಕ್ತಗೊಳಿಸಲು.....

ಶಾಂತಿಯಿಂದ ಸ್ವರಾಜ್ಯ ಸಿಗುವುದೆಂಬ 
ಭ್ರಮೆಯಿಂದ ಹೊರಬರದ ಹೊರತು...
ನವ ತರುಣರಲ್ಲಿ ಸ್ವಾತಂತ್ರ್ಯದ
ಕಿಡಿಯ ಕಿಚ್ಚು ಹಚ್ಚಿಸದ ಹೊರತು.. 
ಪರಂಗಿಗಳಿಗೆ ಫಿರಂಗಿಯ ಗುಂಡುಗಳ
ಮೂಲಕ ಉತ್ತರ ನೀಡದ ಹೊರತು... 
ಇನ್ನೆಲ್ಲಿ ದಕ್ಕೀತು ನಿಮಗೆ ಸ್ವಾತಂತ್ರ್ಯ??

ನೀಡುವೆನು ನಿಮಗೆ ಬಿಸಿ ರಕ್ತದ ವಾಗ್ದಾನ...
ಸ್ವರಾಜ್ಯಕ್ಕಾಗಿ ಕೊಡಿ ನಿಮ್ಮ ಬಿಸಿಯ ನೆತ್ತರ...
ಕೊಂಡೊಯ್ಯುವೆನು  ಭಾರತಾಂಬೆಯ ಧ್ವಜವನು
ಮುಗಿಲೆತ್ತರ...ಸ್ವತಂತ್ರದ ಹತ್ತಿರ..ಹತ್ತಿರ..

ಸ್ವರಾಜ್ಯಕ್ಕಾಗಿ ಮೊಳಗಿತು ಕ್ರಾಂತಿಯ ಕಹಳೆ
ದೇಶದಲ್ಲೆಡೆ ಪಸರಿಸಿತು ಹೋರಾಟದ ಜ್ವಾಲೆ..
ರಾಷ್ಟ್ರೀಯ ಸೇನೆ ಸೇರಲು ತರುಣರ ತವಕ
ಬಿಳಿ ಮೊಗದ ಪರಂಗಿಗಳಿಗೆ ಹೆಚ್ಚಾಯ್ತು ನಡುಕ
ಜೈ ಹಿಂದ್... ಇಕ್ವಿಲಾಬ್ ಜಿಂದಾಬಾದ್..
ಶಾಂತಿಯಿಂದ ಕ್ರಾಂತಿಯೆಡೆಗೆ ಹೊಸ ಮನ್ವಂತರದ
ಹಾದಿಯಲ್ಲಿ ವೇಗವಾಗಿ ಸಾಗಿತು ಸ್ವತಂತ್ರ ಭಾರತ... Subhash Chandra Bose