Nojoto: Largest Storytelling Platform

ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು ಮೆಲ್ಲಗೆ ಕೊಡುವೆ ಅತಿ ಭಕು

ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು
ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ
ಮೆಲ್ಲುತ ಬೆಣ್ಣೆಯ, ಬಾ ದೊರೆಯೇ; ನರಹರಿ ರೂಪನೇ |
ಹಲವಿಹುದು ಭಕುತಿಯಲಿ ಭಾವವು
ಒಲವಿನಲಿ ಭಜಿಸುವೆನು ನಿತ್ಯವು
ಗೆಲುವಿನ ಕ್ಷಣಗಳನು ಕೊಡೆನಗೆ; ಹೇ ಜಗದೊಡೆಯನೇ || 

ಚೋರನೆನಿಸಿದೆ ಕದ್ದು ಬೆಣ್ಣೆಯ
ಶೂರನೆನಿಸಿದೆ ಕೊಂದು ಕಂಸನ
ವೀರ ಸಾರಥಿಯಾದೆ ವಿಭುವೇ; ನರಹರಿ ರೂಪನೇ |
ಭಾರವಾಗಿದೆ ಮನವು ಈದಿನ
ಯಾರಲಿ ಹೇಳಲೆನ್ನ ನೋವನು
ಹರಸುತೆನ್ನ ಸಲಹೋ ಪ್ರಭುವೇ; ಹೇ ಜಗದೊಡೆಯನೇ || 

ನಿಷ್ಠೆಯಿಂದಲಿ ಭಜಿಪೆ ನಿನ್ನನು
ಕಷ್ಟವನು ಹೊಡೆದಟ್ಟುವ ಬಗೆಯ
ಇಷ್ಟದಲಿ ಹೇಳೆನ್ನ ಯಾದವ; ನರಹರಿ ರೂಪನೇ |
ನಷ್ಟವಾಗುವ ಮೊದಲು ಜೀವವು
ದುಷ್ಟ ಭಾವವ ತೊರೆದು ಬದುಕಲು
ಪುಷ್ಟಿಕೊಡು ಮನಕೆ ನೀ ಮಾಧವ; ಹೇ ಜಗದೊಡೆಯನೇ || ಈ ಸಾಲುಗಳು ಭಾಮಿನೀ ಷಟ್ಪದಿಯಲ್ಲಿವೆ. ಈ ಪ್ರಕಾರದಲ್ಲಿ ಗಣ ವಿಂಗಡನೆಯು ಈ ಕೇಳಗಿಂತಿರುತ್ತದೆ.

೩|೪|೩|೪
೩|೪|೩|೪
೩|೪|೩|೪|೩|೪|-
°°°°°°°°°°°°°°°°°°
ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು
ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ
ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು
ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ
ಮೆಲ್ಲುತ ಬೆಣ್ಣೆಯ, ಬಾ ದೊರೆಯೇ; ನರಹರಿ ರೂಪನೇ |
ಹಲವಿಹುದು ಭಕುತಿಯಲಿ ಭಾವವು
ಒಲವಿನಲಿ ಭಜಿಸುವೆನು ನಿತ್ಯವು
ಗೆಲುವಿನ ಕ್ಷಣಗಳನು ಕೊಡೆನಗೆ; ಹೇ ಜಗದೊಡೆಯನೇ || 

ಚೋರನೆನಿಸಿದೆ ಕದ್ದು ಬೆಣ್ಣೆಯ
ಶೂರನೆನಿಸಿದೆ ಕೊಂದು ಕಂಸನ
ವೀರ ಸಾರಥಿಯಾದೆ ವಿಭುವೇ; ನರಹರಿ ರೂಪನೇ |
ಭಾರವಾಗಿದೆ ಮನವು ಈದಿನ
ಯಾರಲಿ ಹೇಳಲೆನ್ನ ನೋವನು
ಹರಸುತೆನ್ನ ಸಲಹೋ ಪ್ರಭುವೇ; ಹೇ ಜಗದೊಡೆಯನೇ || 

ನಿಷ್ಠೆಯಿಂದಲಿ ಭಜಿಪೆ ನಿನ್ನನು
ಕಷ್ಟವನು ಹೊಡೆದಟ್ಟುವ ಬಗೆಯ
ಇಷ್ಟದಲಿ ಹೇಳೆನ್ನ ಯಾದವ; ನರಹರಿ ರೂಪನೇ |
ನಷ್ಟವಾಗುವ ಮೊದಲು ಜೀವವು
ದುಷ್ಟ ಭಾವವ ತೊರೆದು ಬದುಕಲು
ಪುಷ್ಟಿಕೊಡು ಮನಕೆ ನೀ ಮಾಧವ; ಹೇ ಜಗದೊಡೆಯನೇ || ಈ ಸಾಲುಗಳು ಭಾಮಿನೀ ಷಟ್ಪದಿಯಲ್ಲಿವೆ. ಈ ಪ್ರಕಾರದಲ್ಲಿ ಗಣ ವಿಂಗಡನೆಯು ಈ ಕೇಳಗಿಂತಿರುತ್ತದೆ.

೩|೪|೩|೪
೩|೪|೩|೪
೩|೪|೩|೪|೩|೪|-
°°°°°°°°°°°°°°°°°°
ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು
ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ