ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ ಮೆಲ್ಲುತ ಬೆಣ್ಣೆಯ, ಬಾ ದೊರೆಯೇ; ನರಹರಿ ರೂಪನೇ | ಹಲವಿಹುದು ಭಕುತಿಯಲಿ ಭಾವವು ಒಲವಿನಲಿ ಭಜಿಸುವೆನು ನಿತ್ಯವು ಗೆಲುವಿನ ಕ್ಷಣಗಳನು ಕೊಡೆನಗೆ; ಹೇ ಜಗದೊಡೆಯನೇ || ಚೋರನೆನಿಸಿದೆ ಕದ್ದು ಬೆಣ್ಣೆಯ ಶೂರನೆನಿಸಿದೆ ಕೊಂದು ಕಂಸನ ವೀರ ಸಾರಥಿಯಾದೆ ವಿಭುವೇ; ನರಹರಿ ರೂಪನೇ | ಭಾರವಾಗಿದೆ ಮನವು ಈದಿನ ಯಾರಲಿ ಹೇಳಲೆನ್ನ ನೋವನು ಹರಸುತೆನ್ನ ಸಲಹೋ ಪ್ರಭುವೇ; ಹೇ ಜಗದೊಡೆಯನೇ || ನಿಷ್ಠೆಯಿಂದಲಿ ಭಜಿಪೆ ನಿನ್ನನು ಕಷ್ಟವನು ಹೊಡೆದಟ್ಟುವ ಬಗೆಯ ಇಷ್ಟದಲಿ ಹೇಳೆನ್ನ ಯಾದವ; ನರಹರಿ ರೂಪನೇ | ನಷ್ಟವಾಗುವ ಮೊದಲು ಜೀವವು ದುಷ್ಟ ಭಾವವ ತೊರೆದು ಬದುಕಲು ಪುಷ್ಟಿಕೊಡು ಮನಕೆ ನೀ ಮಾಧವ; ಹೇ ಜಗದೊಡೆಯನೇ || ಈ ಸಾಲುಗಳು ಭಾಮಿನೀ ಷಟ್ಪದಿಯಲ್ಲಿವೆ. ಈ ಪ್ರಕಾರದಲ್ಲಿ ಗಣ ವಿಂಗಡನೆಯು ಈ ಕೇಳಗಿಂತಿರುತ್ತದೆ. ೩|೪|೩|೪ ೩|೪|೩|೪ ೩|೪|೩|೪|೩|೪|- °°°°°°°°°°°°°°°°°° ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ