Nojoto: Largest Storytelling Platform

ವಾರ್ಧಕ ಷಟ್ಪದಿಯಲ್ಲಿ ಕಿರುಪರಿಚಯ ೲೲೲೲೲೲೲೲೲೲೲೲೲೲೲೲೲೲ ಭಾ

ವಾರ್ಧಕ ಷಟ್ಪದಿಯಲ್ಲಿ ಕಿರುಪರಿಚಯ
ೲೲೲೲೲೲೲೲೲೲೲೲೲೲೲೲೲೲ
ಭಾವ ಗಂಭೀರ ಮಾತು ಸುಮಧುರ ಮನಸು ಮೃದು
ನೋವ ಮರೆತು ನಲಿವಳಿವಳೆಲ್ಲರೊಡಗೂಡುತ
ಸವಿಯಾದ ಭಾಷೆಯನ್ನಾಡುತಲಿ ನೆಲೆಗೊಂಡಿರುವಳು ಜನ ಮಾನಸದಲಿ.
ನವಿರಾದ ಪದಗಳಲಿ ಬರೆದುಬಿಡುವಳು ಭಾಷ್ಯ
ಅವಳ ಭಾವನೆಯಲ್ಲಿ ನಗು ಬೀರುವುದು ಹಾಸ್ಯ
ಆವರಿಸುವುದು ಮನವನು ಕಲ್ಪನೆಯ ವಿಸ್ಮಯ ವಿಷಯಗಳ ಒಳಾರ್ಥಗಳು.

ಹೃದಯದಾಳಕೆ ಇಳಿದು ಆತ್ಮೀಯಳಾದವಳು
ಮೃದುವಾದ ಮಾತಿಂದ ಮನವನ್ನು ಗೆದ್ದವಳು
ಸದ್ಭಾವದಿಂದ ಬಳಿ ಬಂದು ಒಲವ ಸಾಮ್ರಾಜ್ಯವನು ವಿಸ್ತರಿಸಿದವಳು.
ಮುದ ನೀಡುವ ಬರಹಗಳಲ್ಲಿ ಪಳಗಿರುವವಳು
ಮುದ್ದಾಗಿ ವರ್ಣನೆಯ ಮಾಡಲು ಕಲಿತಿರುವಳು
ಸದ್ದು ಮಾಡುವ ಲೇಖನವ ಬರೆದು ಸದ್ದು ಮಾಡದೆ ತಿರುಗಿ ಕುಳಿತಿರುವಳು. Dedicating a #testimonial to ನಯನ ಭಟ್ ಜಿ.ಎಸ್❣️

ನಯನ ಅವರೇ,
ನಿಮ್ಮ ಪ್ರೊಫೈಲ್ ನಲ್ಲಿ ಒಂದೆರಡು ಸಾಲ್ಗಳನ್ನು ಬರೆದು ಬಿಡಬೇಕೆಂದು ಅನಿಸಿದ್ದಕ್ಕೆ ಈ ಸಾಹಸ ಮಾಡ್ತಿದ್ದೇನೆ. 

ವೈಕ್ಯೂಗೆ ಬಂದು ವರುಷ ಕಳೆದ ಬಳಿಕ ಇದೇ ಮೊದಲಬಾರಿಗೆ ಟೆಸ್ಟಿಮೋನಿಯಲ್ ಬರೆಯುತ್ತಿರುವುದು. ಪ್ರೀತಿ ಪ್ರೇಮದ ಲೋಕದಲ್ಲಿ ಅಲೆದಾಡುತ್ತಿದ್ದ ಸಮಯದಲ್ಲೂ ಒಬ್ಬ ವ್ಯಕ್ತಿಯ ಬಗ್ಗೆ ಒಂದೆರಡು ಸಾಲಗಳನ್ನು ಕೂಡ ಬರೆದಿರಲಿಲ್ಲ..😉 ಅಂಥಾದ್ರಲ್ಲಿ ಈಗ ಬರೆಯಬೇಕೆನ್ನುವ ಬಯಕೆಯನ್ನು ಹುಟ್ಟಿಸಿದ್ದು ನಿಮ್ಮ ನಿಸ್ವಾರ್ಥ ಸ್ನೇಹ..🤗 

ಎಷ್ಟೋ ಸಲ ಟೆಸ್ಟಿಮೋನಿಯಲ್ ಬರೆಯಬೇಕೆನ್ನುವ ಯೋಚನೆ ಬಂದಾಗೆಲ್ಲಾ ಸ್ನೇಹ, ಗೌರವವನ್ನು ಬರೆದು ತಿಳಿಸುವ ಅವಶ್ಯಕತ
ವಾರ್ಧಕ ಷಟ್ಪದಿಯಲ್ಲಿ ಕಿರುಪರಿಚಯ
ೲೲೲೲೲೲೲೲೲೲೲೲೲೲೲೲೲೲ
ಭಾವ ಗಂಭೀರ ಮಾತು ಸುಮಧುರ ಮನಸು ಮೃದು
ನೋವ ಮರೆತು ನಲಿವಳಿವಳೆಲ್ಲರೊಡಗೂಡುತ
ಸವಿಯಾದ ಭಾಷೆಯನ್ನಾಡುತಲಿ ನೆಲೆಗೊಂಡಿರುವಳು ಜನ ಮಾನಸದಲಿ.
ನವಿರಾದ ಪದಗಳಲಿ ಬರೆದುಬಿಡುವಳು ಭಾಷ್ಯ
ಅವಳ ಭಾವನೆಯಲ್ಲಿ ನಗು ಬೀರುವುದು ಹಾಸ್ಯ
ಆವರಿಸುವುದು ಮನವನು ಕಲ್ಪನೆಯ ವಿಸ್ಮಯ ವಿಷಯಗಳ ಒಳಾರ್ಥಗಳು.

ಹೃದಯದಾಳಕೆ ಇಳಿದು ಆತ್ಮೀಯಳಾದವಳು
ಮೃದುವಾದ ಮಾತಿಂದ ಮನವನ್ನು ಗೆದ್ದವಳು
ಸದ್ಭಾವದಿಂದ ಬಳಿ ಬಂದು ಒಲವ ಸಾಮ್ರಾಜ್ಯವನು ವಿಸ್ತರಿಸಿದವಳು.
ಮುದ ನೀಡುವ ಬರಹಗಳಲ್ಲಿ ಪಳಗಿರುವವಳು
ಮುದ್ದಾಗಿ ವರ್ಣನೆಯ ಮಾಡಲು ಕಲಿತಿರುವಳು
ಸದ್ದು ಮಾಡುವ ಲೇಖನವ ಬರೆದು ಸದ್ದು ಮಾಡದೆ ತಿರುಗಿ ಕುಳಿತಿರುವಳು. Dedicating a #testimonial to ನಯನ ಭಟ್ ಜಿ.ಎಸ್❣️

ನಯನ ಅವರೇ,
ನಿಮ್ಮ ಪ್ರೊಫೈಲ್ ನಲ್ಲಿ ಒಂದೆರಡು ಸಾಲ್ಗಳನ್ನು ಬರೆದು ಬಿಡಬೇಕೆಂದು ಅನಿಸಿದ್ದಕ್ಕೆ ಈ ಸಾಹಸ ಮಾಡ್ತಿದ್ದೇನೆ. 

ವೈಕ್ಯೂಗೆ ಬಂದು ವರುಷ ಕಳೆದ ಬಳಿಕ ಇದೇ ಮೊದಲಬಾರಿಗೆ ಟೆಸ್ಟಿಮೋನಿಯಲ್ ಬರೆಯುತ್ತಿರುವುದು. ಪ್ರೀತಿ ಪ್ರೇಮದ ಲೋಕದಲ್ಲಿ ಅಲೆದಾಡುತ್ತಿದ್ದ ಸಮಯದಲ್ಲೂ ಒಬ್ಬ ವ್ಯಕ್ತಿಯ ಬಗ್ಗೆ ಒಂದೆರಡು ಸಾಲಗಳನ್ನು ಕೂಡ ಬರೆದಿರಲಿಲ್ಲ..😉 ಅಂಥಾದ್ರಲ್ಲಿ ಈಗ ಬರೆಯಬೇಕೆನ್ನುವ ಬಯಕೆಯನ್ನು ಹುಟ್ಟಿಸಿದ್ದು ನಿಮ್ಮ ನಿಸ್ವಾರ್ಥ ಸ್ನೇಹ..🤗 

ಎಷ್ಟೋ ಸಲ ಟೆಸ್ಟಿಮೋನಿಯಲ್ ಬರೆಯಬೇಕೆನ್ನುವ ಯೋಚನೆ ಬಂದಾಗೆಲ್ಲಾ ಸ್ನೇಹ, ಗೌರವವನ್ನು ಬರೆದು ತಿಳಿಸುವ ಅವಶ್ಯಕತ