ಐಂದವ ಮುಡಿಯಲಿ ಚಂದನ ಹಣೆಯಲಿ ಫಣಿಭೂಷಣನೇ ಪರಮಾತ್ಮ ನಿನ್ನಿರುವಾಗಲಿ ನನ್ನಾತ್ಮ ಶರಭ ಸ್ವರೂಪಿಯೆ ನಿರ್ಮಲ ಜ್ಞಾನವೆ ಹರಕೆಯ ಹರನು ನೀನಯ್ಯ.. ತಿಳುಹುಯ್ಯಾ ಹುಟ್ಟುತ ಸಾಯುತ ಬಾಗುತ ಬೇಡುತ ಸೋತಿದೆ ಜೀವವು ಕೇಳಯ್ಯ.. ಪರಿಹರಿಸಯ್ಯ ಪರಮಸ್ವರೂಪಿಯೆ ಪಾಮರ ನಾನು ಪಾವನ ನಾಮವು ನಿನದಯ್ಯ ... ನುಡಿಸಯ್ಯ ಭಕ್ತಿಯ ಅರಿಯೆನು ಮಂತ್ರವ ತಿಳಿಯೆನು ದರ್ಶನ ಮಾರ್ಗವ ಹೇಳಯ್ಯ.. ಪರಿಗಣಿಸಯ್ಯ #csmayachari #devotional #prayer #poetry #ಭಕ್ತಿಗೀತೆ #ಕವನ #ಕನ್ನಡಕವಿತೆ #ಪರಮಾತ್ಮ