ತಿರುಗಿ ನಡೆದೆ, ಭಾರವಾಗಿತ್ತು ಹೆಜ್ಜೆ. ಬಹಳವಿತ್ತು ಮರಳುವ ಹಂಬಲ, ಕಾಯುತ್ತಿದ್ದೆ ನಿನ್ನದೊಂದು ಕರೆಗಾಗಿ. ಅಸಡ್ಡೆಯೋ ಅಜ್ಞಾನವೋ ಅನಿಸಿರಲಿಲ್ಲ ನಿನಗೆ.. ಅಸಹಾಯಕನ ಸಾಮೀಪ್ಯ ಅಗತ್ಯವೆಂದು. ತಿರುವಲ್ಲಿ ಮರೆಯಾದ ಮರುಕ್ಷಣ ತೆರೆದು ನೋಡಿದೆ ಯಾಕೆ ಎಂದೂ ತೆರೆಯದ ಒಲವಿನ ಬಾಗಿಲನ್ನು.. ಕಾಣಿಸಿರಬಹುದು ನಿನಗೀಗ ಸತ್ತು ಬಿದ್ದಿರುವ ನನ್ನ ಮನದ ಭಾವಗಳು. ಧಾವಿಸಬೇಡ ಹೆಸರ್ಹಿಡಿದು ಕೂಗುತ್ತಾ.. ಚೆಲ್ಲಿರುವೆನು ಉಸಿರನ್ನು ಆ ತಿರುವಿನಲ್ಲೇ. ಹತ್ತಿರುವಷ್ಟು ಕಾಲ ತಿಳಿಯದ ಸಂಬಂಧಗಳ ಮಹತ್ವ.. ದೂರವಾದ ನಂತರ ತಿಳಿದರೆ ಏನು ಪ್ರಯೋಜನ..🤔 #kvprakashquotes Hello Resties! ❤️ Collab on this #rzpictureprompt and add your thoughts to it! 😊