ಗಿರಿಎತ್ತಿ ನಿಂತವನ ಬೆಣ್ಣೆಯನು ಮೆದ್ದವನ ಕುಂತಲ್ಲೇ ನೆನೆದಾಗ ಮನವಾಯ್ತು ರಾಧೆ ಕಣ್ಣಲ್ಲೇ ಕಂಡಾಯ್ತು ಗೋಲೋಕ ಲೀಲೆ ಮಾಳಿಗೆ ಮೇಲೆ ಕುಳಿತಿರುವೆ ಒಬ್ಬಳೇ ಕಣ್ಣೇಕೊ ತಾನೆ ಆಕಾಶ ದಿಟ್ಟಿಸಲು ಕಡೆದಿಟ್ಟ ಬೆಣ್ಣೆಯದು ಬೆಳ್ಳನೇ ಮೋಡ ತಿಂದಂತೆ ಕಾಣುವನು ಆ ಕಳ್ಳ ಕೃಷ್ಣ. ಬೀದಿಯಲಿ ನಡೆವಾಗ ಗೋಮಾತೆ ಬಂದಾಗ ಗೋಪಾಲ ಇರುವನ್ನು ನೆನೆದಂಥ ಭಾವ ಮಗುವೊಂದು ನಕ್ಕಾಗ ಮಣ್ಣನ್ನು ಹಿಡಿದಾಗ ಬಾಯಲ್ಲಿ ಬ್ರಹ್ಮಾಂಡ ಇರುವಂಥ ಕನಸು ಕೊಳದ ಬಳಿಯಲ್ಲಿ ಗಿಡದ ಅಡಿಯಲ್ಲಿ ಇರಲು ನಾನಲ್ಲಿ ಮನದ ತುಂಬೆಲ್ಲ ಅವನೇ ಕಾಳಿಂಗನೇರಿ ಬರುವ ಎಂದೊಂದು ಆಸೆ ಹುಸಿಯಾಗಿ ನೊಂದಿದೆ ನನ್ನ ಈ ಮನಸು ದೃಷ್ಟಿ ಹೋದಲ್ಲೆಲ್ಲ ಮಾಧವನ ಇರುಹು ಆದರೂ ಬಾರನು ಎದುರೆಂದು ಕೊರಗು ಹೇಳಯ್ಯ ಮಹರಾಯ ಮಾಡಲಿ ಏನೂ ನೆನೆದಾಗ ನೀಹಾಗೆ ಎದುರು ಬರಲು.. #ಕೃಷ್ಣ #ಭಕ್ತಿಗೀತೆ #ಕನ್ನಡಕವಿತೆ #csmayachari #poetry #devotional #yqquotesಕನ್ನಡ #krishna