ಪ್ರೇಮದ ಮೂರುತಿ ಧರ್ಮದ ಸಾರ ಮೋಹದ ಮೋಹನ ವಿಷ್ಣುವೆ ತಾನೆ ಆದಿಯ ಆದಿಯು ಸೃಷ್ಠಿಯ ಧಾರಕ ಸುರಜನ ಋಷಿಮನ ಕರ್ಮದ ಪ್ರೇರಕ ದಾಸರ ವಾಣಿಯ ಆಳದ ಚೇತನ ನಿನ್ನಯ ಲೀಲೆಯೆ ನಿತ್ಯ ವಿನೂತನ ಉದರದಿ ಬ್ರಹ್ಮನ ಹೊತ್ತಿಹ ಜನಕ ಹರನ ರೂಪದಿ ಪೊರೆಯುವ ನಾಯಕ ಕಲ್ಪವೆ ನರಹರಿ ಕಲಿಯೂ ಅವನೆ ಬದುಕಿನ ಬಂಧನ ಕೊಟ್ಟವ ನೀನೇ ಅಕ್ಷರ ಮೂಲದ ಸ್ವರವೂ ಹರಿಯೇ ಚಿತ್ತದ ಚಿಂತನ ಮಥನವೂ ಹರಿಯೆ ನಾನು ನಾನೆಂಬ ತನುವೂ ಹರಿಯೆ ಗಿರಿಧರ ಹೊರತು ಏನೊಂದೂ ಅರಿಯೆ ಕಾರಣ ಇರದೆ ಕಾರುಣ್ಯ ಕೊಡುವ ಬೇಡದೆ ಭಕ್ತರ ಇಷ್ಟಾರ್ಥ ಅರಿಯುವ ಮನಸಿನ ಮಾಯೆ ತುಂಬಿದ ಅವನಿಗೆ ಬೇಡಲಿ ಏನನು? ತಿಳಿಯದ ಅವಗೆ #csmayachari #kannadapoem #devotional #lordkrishna #ಕನ್ನಡಕವಿತೆ #ಭಕ್ತಿಗೀತೆ #yqquotes #poetry