ಭೋಗ ಷಟ್ಪದಿ: ಮೊದಲ ಪ್ರಯತ್ನ **************************** ಕಣ್ಣ ಅಂಚು ನುಡಿದ ಪದಕೆ ಸಣ್ಣದೊಂದು ಆಸೆ ಚಿಗುರಿ ಎಣ್ಣೆ ಸುರಿದ ಹಣತೆಯಂತೆ ಆಯಿತಲ್ಲವೇ | ಬಣ್ಣಗೆಟ್ಟ ಬಾಳಿನಲ್ಲಿ ಕ್ಷಣದಿ ಬೆರೆತ ಭಾವದಲಿ ತೃಣದ ಬದುಕು ಒಲವಿನಿಂದ ಬೆಳಗಿತಲ್ಲವೇ || ಭಾವ ಲೋಕದಲ್ಲಿ ನಿನ್ನ ಆವರಿಸಿದೆ ಪದಗಳಿಂದ ಸಾವಧಾನವಾಗಿ ನೆಲೆಸು ಆತ್ಮದೇವತೆ | ಯಾವ ಜನ್ಮದ ಅನುರಾಗ ನೋವ ಮರೆವುದೀಗ ಸರಳ ಜೀವನಕೆ ಬೆಳಕಾಗು ನೀ ಆತ್ಮಬಂಧುವೇ || ಇದು ಷಟ್ಪದಿ ಬರೆಯುವ ನನ್ನ ಮೊದಲ ಪ್ರಯತ್ನ..❣️ ಅದಕ್ಕೆ ಪ್ರೇರಣೆಯಾದವರಿಗೆ ಕೃತಜ್ಞತೆಗಳನ್ನು ತಿಳಿಸಲೇಬೇಕಲ್ವಾ. ಆ ಎರಡು ಹೆಸರುಗಳು... Archana Kannantha ಹಾಗೂ ನಯನ ಭಟ್ ಜಿ.ಎಸ್❣️