Nojoto: Largest Storytelling Platform

Best ವಾರ್ಧಕಷಟ್ಪದಿ Shayari, Status, Quotes, Stories

Find the Best ವಾರ್ಧಕಷಟ್ಪದಿ Shayari, Status, Quotes from top creators only on Nojoto App. Also find trending photos & videos about

  • 1 Followers
  • 3 Stories

ವಿಜಯ್

ಆಂಜನೇಯನ ಸೀತಾನ್ವೇಷಣೆ: ವಾರ್ಧಕ ಷಟ್ಪದಿ ****************************** ಹುಡುಕುತ ಹೊರಟ ಪವನ ನಂದನನು ನಡುವಲ್ಲಿ ತಡವರಿಸಿದನು ಧರಣಿ ಪುತ್ರಿಯ ನೆಳವಿಲ್ಲದೆ ತೊಡಕಾಯ್ತು ಅಸುರನ ಅಗಣಿತ ಅರಸಿಯರ ಪಾಳಯವೇ ನೆರೆದಿರುವಾಗ | ಮಡಿವಂತಿಕೆಯ ಬಿಟ್ಟು ಮಣಿದಿರುವಳೇ ಸೀತೆ ನಡುವೆಯೊಮ್ಮೆ ಉದಿಸಿತ್ತು ಮನದೊಳಗೆ ಕುಚೋದ್ಯ ಬಡಿದುಕೊಂಡನು ಹಣೆಯ ತನ್ನ ಅವಿವೇಕವ ನೆನೆದು ಮತ್ತೆ ಪರಿತಪಿಸುತ || #kvprakashquotes #ವಿಜಯ್_ಷಟ್ಪದಿ #ವಾರ್ಧಕಷಟ್ಪದಿ

read more
ಆಂಜನೇಯನ ಸೀತಾನ್ವೇಷಣೆ: ವಾರ್ಧಕ ಷಟ್ಪದಿ
*************************************
ಹುಡುಕುತ ಹೊರಟ ಪವನ ನಂದನನು ನಡುವಲ್ಲಿ
ತಡವರಿಸಿದನು ಧರಣಿ ಪುತ್ರಿಯ ನೆಳವಿಲ್ಲದೆ
ತೊಡಕಾಯ್ತು ಅಸುರನ ಅಗಣಿತ ಅರಸಿಯರ ಪಾಳಯವೇ ನೆರೆದಿರುವಾಗ |
ಮಡಿವಂತಿಕೆಯ ಬಿಟ್ಟು ಮಣಿದಿರುವಳೇ ಸೀತೆ
ನಡುವೆಯೊಮ್ಮೆ ಉದಿಸಿತ್ತು ಮನದೊಳಗೆ ಕುಚೋದ್ಯ
ಬಡಿದುಕೊಂಡನು ಹಣೆಯ ತನ್ನ ಅವಿವೇಕವ ನೆನೆದು ಮತ್ತೆ ಪರಿತಪಿಸುತ || 

ಬಸವಳಿದನು ಅಂತಃಪುರದಲೆಲ್ಲಾ ಹುಡುಕಿ
ಅಶೋಕವನವನು ಹೊಕ್ಕನು ಬೇಸರವು ಇಣುಕಿ
ವಿಷಣ್ಣ ಮನದಿಂದಿರಲು ವಿದೂರದಲ್ಲಿ ಕಂಡನು ಅಯೋನಿಜೆಯನಲ್ಲಿ |
ಸಶಕ್ತ ಹನುಮನು ಶಿರವ ಬಾಗಿಸಿ ನಮಿಸುತಲಿ
ತುಸು ಹೆಚ್ಚು ಭಕುತಿಯಲಿ ತೋರಿದನು ಉಂಗುರವ
ನಸುನಗುತ ತನ್ನರಸನ ಕುರಿತೆಲ್ಲವ ತಿಳಿದು ಹರುಷಗೊಂಡಳು ಅವನಿಜೆ || ಆಂಜನೇಯನ ಸೀತಾನ್ವೇಷಣೆ: ವಾರ್ಧಕ ಷಟ್ಪದಿ
******************************
ಹುಡುಕುತ ಹೊರಟ ಪವನ ನಂದನನು ನಡುವಲ್ಲಿ
ತಡವರಿಸಿದನು ಧರಣಿ ಪುತ್ರಿಯ ನೆಳವಿಲ್ಲದೆ
ತೊಡಕಾಯ್ತು ಅಸುರನ ಅಗಣಿತ ಅರಸಿಯರ ಪಾಳಯವೇ ನೆರೆದಿರುವಾಗ |
ಮಡಿವಂತಿಕೆಯ ಬಿಟ್ಟು ಮಣಿದಿರುವಳೇ ಸೀತೆ
ನಡುವೆಯೊಮ್ಮೆ ಉದಿಸಿತ್ತು ಮನದೊಳಗೆ ಕುಚೋದ್ಯ
ಬಡಿದುಕೊಂಡನು ಹಣೆಯ ತನ್ನ ಅವಿವೇಕವ ನೆನೆದು ಮತ್ತೆ ಪರಿತಪಿಸುತ ||

ವಿಜಯ್

ಪಿಡಿಪು: ಹಿಡಿತ, ಬಂಧನ ಕುಚಿತ: ಸಂಕುಚಿತ, ಅಲ್ಪ ಪಳಿವು: ಆರೋಪ °°°°°°°°°°°°°°° ರಾಧೆಯ ಅಳಲು: ವಾರ್ಧಕ ಷಟ್ಪದಿ ******************************** ಪರಿಣಯದ ಪಿಡಿಪನು ಬಯಸಲಾರೆನು ಮಾಧವ ಪರಿ ಪರಿಯ ಲೀಲೆಗಳ ಪುಳಕವಿದೆ ಮನದೊಳಗೆ #kvprakashquotes #ವಿಜಯ್_ಷಟ್ಪದಿ #ವಾರ್ಧಕಷಟ್ಪದಿ

read more
ರಾಧೆಯ ಅಳಲು: ವಾರ್ಧಕ ಷಟ್ಪದಿ
********************************
ಪರಿಣಯದ ಪಿಡಿಪನು ಬಯಸಲಾರೆನು ಮಾಧವ
ಪರಿ ಪರಿಯ ಲೀಲೆಗಳ ಪುಳಕವಿದೆ ಮನದೊಳಗೆ
ಸರಿದ ಸವಿ ಸಮಯದ ನೆನಪಿನ ಬುತ್ತಿಯಿದೆ ಹೃದಯದೊಳಗೆ ಹರುಷಗೊಳ್ಳಲು |
ಪರಿಶುದ್ಧ ಗೆಳೆತನಕ್ಕೆ ಪ್ರಣಯದ ಬಣ್ಣವು
ಪರಿಹರಿಸಲಾಗದ ವ್ಯಾಧಿ ಕುಚಿತ ಮನಸಿಗೆ
ಪರಿಮಳದ ಪುಷ್ಪದ ಘಮ, ಪಳಿವಿಗೆ ಕಳೆಗುಂದುವುದೇ ಹೇಳ್ ನೀ ಯಾದವ || 

ಮರಳಿ ಬಂದೆನು ಬಳಿಗೆ ಮರಣ ಕಾಲವು ಬರಲು
ಮುರಳಿಯಲಿ ಬೆರೆತ ನಿನ್ನುಸಿರನು ಸ್ಪರ್ಶಿಸಲು
ಕರಗಳನು ಪಿಡಿದು ಉದ್ಧರಿಸಿ ಮೋಕ್ಷದ ಹಾದಿಯ ತೋರಿಸಿದೆ ಅಂದೆನಗೆ |
ಮುರಿದು ಹಾಕಿದೆ ಯಾಕೆ ಕೊಳಲ ನೀನಾ ದಿನದಿ
ಮರೆತೆಯೇ ಆತ್ಮಗಳ ಯುಗ ಯುಗದ ಅನುಬಂಧ
ಮೆರೆಸಿದ ಕ್ಷಣಗಳನ್ನು ನಿನ್ನೆದೆ ಕಮಲದಲ್ಲಿ ಕುಳ್ಳಿರಿಸುತ ನನ್ನನು || ಪಿಡಿಪು: ಹಿಡಿತ, ಬಂಧನ
ಕುಚಿತ: ಸಂಕುಚಿತ, ಅಲ್ಪ
ಪಳಿವು: ಆರೋಪ
°°°°°°°°°°°°°°°
ರಾಧೆಯ ಅಳಲು: ವಾರ್ಧಕ ಷಟ್ಪದಿ
********************************
ಪರಿಣಯದ ಪಿಡಿಪನು ಬಯಸಲಾರೆನು ಮಾಧವ
ಪರಿ ಪರಿಯ ಲೀಲೆಗಳ ಪುಳಕವಿದೆ ಮನದೊಳಗೆ

ವಿಜಯ್

#ವಿಜಯ್_ಷಟ್ಪದಿ #ವಾರ್ಧಕಷಟ್ಪದಿ #kvprakashquotes #rzpicprompt2804 #yqrestzone #restzone #collabwithrestzone #YourQuoteAndMine Collaborating with Rest Zone

read more
[ವಾರ್ಧಕ ಷಟ್ಪದಿ]

ಮುದುಡಿದ್ದ ಮನದ ಮೌನಕೆ ಭಾಷ್ಯ ಬರೆದವಳು
ಚದುರಿದ್ದ ಭಾವಗಳಿಗೆ ಮರುಜನ್ಮ ನೀಡುತಿರೆ,
ಎದೆಯ ಕದವನು ತೆರೆದಿರಿಸಿದೆ ನನ್ನೆದುರಲಂದವಳು ನಿಂತಿರುವಾಗಲೇ |
ಮುದ ನೀಡುವ ಮಾತಿಂದ ಜೊತೆ ಸೇರಿದವಳೇ
ಬದುಕಿನ ರಸ ನಿಮಿಷಗಳಿಗೆ ಕಾರಣವು ನೀನು
ಹದಗೊಳಿಸು ಮನವನ್ನು ಅರಿತು ಬೆರೆತೆನ್ನ ಬಾಳನ್ನು ಬೆಳಗುತ ಈಗಲೇ || #ವಿಜಯ್_ಷಟ್ಪದಿ
#ವಾರ್ಧಕಷಟ್ಪದಿ
#kvprakashquotes

#rzpicprompt2804 #yqrestzone #restzone #collabwithrestzone #YourQuoteAndMine
Collaborating with Rest Zone


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile