Find the Best ತರಹೀ_ಗಝಲ್ Shayari, Status, Quotes from top creators only on Nojoto App. Also find trending photos & videos about
ವಿಜಯ್
ತರಹೀ ಗಝಲ್: ನಯನ ಅವರ ಊಲಾ ಮಿಸ್ರ °°°°°°°°°°°°°°°°°°°°°°°°°°°°°°°°°°°°°°°°°°° ಅವರಿವರನ್ನು ಜರೆಯುತ್ತಾ ನಾಳೆಗಳ ಭವ್ಯ ಸಾರವನ್ನು ಹಿಂಡುತ್ತಿದ್ದೇನೆ ಅಗಮ್ಯವನ್ನು ನೆನೆಯುತ್ತಾ ಈ ಕ್ಷಣದ ನಲಿವನ್ನು ಕಳೆದುಕೊಳ್ಳುತ್ತಿದ್ದೇನೆ ಅಲಕ್ಷಿಸುತ ಮುನ್ನಡೆಯಬೇಕು ಅನ್ಯರ ಲೋಪದೋಷಗಳನ್ನು ನಾವಿಲ್ಲಿ ಅರಿವಿರದ ವ್ಯಾಜ್ಯಗಳ ಕಟಕಟೆಯಲ್ಲಿರಿಸಿ ಕಾಲವನ್ನು ವ್ಯಯಿಸುತ್ತಿದ್ದೇನೆ ಅಂತರವನ್ನು ಬಯಸಿದವರ ಮನದಲ್ಲಿ ಆತ್ಮೀಯತೆಗೆಲ್ಲಿರುವುದು ಸ್ಥಾನ ಎಳೆದು ಮುಚ್ಚಿದ ಕದದ ಬಳಿ ಕುಳಿತು ಭವಿಷ್ಯವನ್ನು ನಿರ್ಲಕ್ಷಿಸುತ್ತಿದ್ದೇನೆ ಪ್ರಬುದ್ಧ ಮನದಲ್ಲಷ್ಟೇ ನಡೆಯುವುದು ನಿರ್ಲಿಪ್ತತೆಯಿಂದ ನಿದಿಧ್ಯಾಸನ ಪ್ರಕ್ಷುಬ್ಧತೆಯ ಪರಾಕಾಷ್ಠೆಯಲ್ಲಿ ತಪಿಸುತ ಚಿತ್ತಸ್ವಾಸ್ಥ್ಯವನ್ನು ಸುಡುತ್ತಿದ್ದೇನೆ ಉಡಿಯೊಳಗೆ ಇರಿಸಿದ ಇಂಗಳವದು ದಹಿಸದಿರುವುದೇ ಒಳಗೊಳಗೆ ಹುಚ್ಚು ಮನಸಿನ ಹೊಯ್ದಾಟದಲ್ಲಿ "ವಿಜಯ"ವನ್ನು ವರ್ಜಿಸುತ್ತಿದ್ದೇನೆ ತರಹೀ ಗಝಲ್: ನಯನ ಭಟ್ ಜಿ.ಎಸ್❣️ ಅವರ ಊಲಾ ಮಿಸ್ರ #ವಿಜಯ್_ಗಝಲ್ # 11 #ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್ #kvprakashquotes
ತರಹೀ ಗಝಲ್: ನಯನ ಭಟ್ ಜಿ.ಎಸ್❣️ ಅವರ ಊಲಾ ಮಿಸ್ರ #ವಿಜಯ್_ಗಝಲ್ # 11 #ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್ #kvprakashquotes
read moreವಿಜಯ್
ತರಹೀ ಗಝಲ್; ನಯನ ಅವರ ಊಲಾ ಮಿಸ್ರ ****************************** ಅಹರ್ನಿಶಿ ನಲುಗುತ್ತಿದೆ ಮುತ್ತಿನಂಥ ಸೊಲ್ಲು ಬದುಕಾಗುತಿದೆ ಮಾಯಾಬಜಾರ್ ಅಹೋರಾತ್ರಿ ಕದಡುತ್ತಿವೆ ಮುಗ್ದಹೃದಯಗಳು ಜಗವಾಗುತಿದೆ ಮಾಯಾಬಜಾರ್ ಮೃಷೆಯ ಮುಖವಾಡಗಳು ಬಿಕರಿಯಾಗುತಿವೆ ಭರ್ಜರಿಯಾಗಿ ರಾಜ ಪಥದಲ್ಲಿ ಮಡಿದ ಮನುಷ್ಯತ್ವದ ಗೋರಿಯ ಮೇಲೆ ಉದಯವಾಗುತಿದೆ ಮಾಯಾಬಜಾರ್ ಬಯಸಿ ಬಳಲದಿರು ಅನುನಿತ್ಯ ಭವ್ಯ ಭಾವಗಳನ್ನು ಅಸುನೀಗಿದ ಮನಸುಗಳಿಂದ ನೈತಿಕತೆಯ ಶವಯಾತ್ರೆಯಲಿ ಕುಣಿದಾಡಲು ನಡೆಯಾಗುತಿದೆ ಮಾಯಾಬಜಾರ್ ಕರುಳ ಬಳ್ಳಿಯ ನಂಟನು ಮರೆತು ಹೆತ್ತೊಡಲ ನೋಯಿಸಿ ನಗುವ ನರಾಧಮರು ಕರುಣೆಯು ಕಣ್ಮರೆಯಾಗಿ ಇಹದೊಳಗೆ ಸಂಬಂಧವಾಗುತಿದೆ ಮಾಯಾಬಜಾರ್ ಕಲುಷಿತಗೊಂಡ ಕನವರಿಕೆಗಳು ಎಡವುತ್ತಾ ಸಾಗುತ್ತಿವೆ 'ವಿಜಯ"ದ ಹಾದಿಯಲ್ಲಿ ಕಿತ್ತೊಗೆದ ಚಿತ್ತವೃತ್ತಿಯು ಬೆಂಬಿಡದೆ ಕಾಡಿ ಕುಣಿಕೆಯಾಗುತಿದೆ ಮಾಯಾಬಜಾರ್ ತರಹೀ ಗಝಲ್: ನಯನ ಭಟ್ ಜಿ.ಎಸ್❣️ಅವರ ಊಲಾ ಮಿಸ್ರ ನಮ್ಮಿಬ್ಬರಲ್ಲಿ ಇರುವ ಸಾಮ್ಯತೆ ಅಂದ್ರೆ ನನಗೂ ಹೊಸ ಹೊಸ ಪದಗಳನ್ನು ಹುಡುಕಿ ಜೋಡಿಸಬೇಕೆನ್ನುವ ಹುಚ್ಚು. ಅದೇ ಕಾರಣಕ್ಕೆ ನಿಮ್ಮ ಗಝಲ್ ನ ಭಾವವನ್ನು ನನ್ನ ಪ್ರೊಫೈಲ್ ನಲ್ಲಿ ಮುಂದುವರೆಸುವ ಒಂದು ಪುಟ್ಟ ಪ್ರಯತ್ನ ಮಾಡಿರುವೆ. ಪದಗಳ ಗಾಂಭೀರ್ಯ ಕಡಿಮೆಯಾಗಿದ್ದರೆ ಮನ್ನಿಸಿ ಆಯ್ತಾ...😊 #ವಿಜಯ್_ಗಝಲ್ # 10 #ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್
ತರಹೀ ಗಝಲ್: ನಯನ ಭಟ್ ಜಿ.ಎಸ್❣️ಅವರ ಊಲಾ ಮಿಸ್ರ ನಮ್ಮಿಬ್ಬರಲ್ಲಿ ಇರುವ ಸಾಮ್ಯತೆ ಅಂದ್ರೆ ನನಗೂ ಹೊಸ ಹೊಸ ಪದಗಳನ್ನು ಹುಡುಕಿ ಜೋಡಿಸಬೇಕೆನ್ನುವ ಹುಚ್ಚು. ಅದೇ ಕಾರಣಕ್ಕೆ ನಿಮ್ಮ ಗಝಲ್ ನ ಭಾವವನ್ನು ನನ್ನ ಪ್ರೊಫೈಲ್ ನಲ್ಲಿ ಮುಂದುವರೆಸುವ ಒಂದು ಪುಟ್ಟ ಪ್ರಯತ್ನ ಮಾಡಿರುವೆ. ಪದಗಳ ಗಾಂಭೀರ್ಯ ಕಡಿಮೆಯಾಗಿದ್ದರೆ ಮನ್ನಿಸಿ ಆಯ್ತಾ...😊 #ವಿಜಯ್_ಗಝಲ್ # 10 #ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್ #kvprakashquotes
read moreವಿಜಯ್
ತರಹೀ ಗಝಲ್: ನಯನ ಅವರ ಊಲಾ ಮಿಸ್ರ ******************************* ಹೃದಯದೂರಲಿ ನೆನಪುಗಳ ನಂದಾದೀಪ ನಿಡುಸುಯ್ದ ಉಸಿರಿಗೆ ಯಾರು ಹೊಣೆ ತೆರೆದು ತೋರಿಸಿದ ನಿಷ್ಕಲ್ಮಶ ಪ್ರೀತಿಯ ಆಳವನರಿಯದ ನಿಲುವಿಗೆ ಯಾರು ಹೊಣೆ ಕಾಲ ಗರ್ಭದಲ್ಲಿ ಲೀನವಾಯಿತು ನೀನೆದೆಯೊಳಗೆ ಎರಕ ಹೊಯ್ದ ಪ್ರೀತಿಯ ಎಸಕ ಕನಿಕರವಿಲ್ಲದೆ ಮನದ ಕದವ ಮುಚ್ಚಲು ಅಸುನೀಗಿದ ಭಾವಗಳಿಗೆ ಯಾರು ಹೊಣೆ ಮುತ್ತಾಗಿದೆ ಸ್ವಾತಿ ಮಳೆಯ ಹನಿಯಂತೆ ನೀ ಕಿವಿಯಲ್ಲಿ ಉಲಿದ ಒಲವಿನ ಪಲ್ಲವಿ ಅಂತರಾಳದಲ್ಲಿ ಭೋರ್ಗರೆಯುತ್ತಿರುವ ನನಸಾಗದ ಕನಸುಗಳಿಗೆ ಯಾರು ಹೊಣೆ ಚಿತ್ತದಲ್ಲಿ ಚಿರಂತನವಾಗಿದೆ ಅಸುನೀಗಿದ ಸುಮಧುರ ಕ್ಷಣಗಳ ಚಿರಸ್ಥಾಯಿ ರೂಪ ಭರವಸೆಯನ್ನು ಬರಿದಾಗಿಸಿ ಚಿತೆಯೇರಿಸುವ ಚಿಂತೆಯ ನೋವಿಗೆ ಯಾರು ಹೊಣೆ ಅನುಮಾನ ಅವಮಾನಗಳ ಕೊಂಕು ನುಡಿಗಳೇ ವಿಜಯ ಶಿಖರದ ಮೆಟ್ಟಿಲುಗಳು ಹಣೆಬರಹವನ್ನು ಹೊಣೆಯಾಗಿಸಿ ಸಾಧಿಸದೆ ಮುಗಿಸಿದ ಬದುಕಿಗೆ ಯಾರು ಹೊಣೆ ಎಸಕ : ಕಾಂತಿ, ಸೊಬಗು, ವೈಭವ, ಪ್ರತಾಪ ತರಹೀ ಎನ್ನುವ ಶೀರ್ಷಿಕೆಯನ್ನೇನೋ ಕೊಟ್ಟಿದ್ದೇನೆ. ಆದ್ರೆ ಮೂಲ ಬರಹದ ತರಹ ಇದೆ ಎನ್ನುವ ಖಾತರಿಯಿಲ್ಲ. ಆತ್ಮೀಯತೆಯಿದ್ದಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮನ್ನಿಸುವ ಹೃದಯ ವೈಶಾಲ್ಯತೆ ಕೂಡ ಇರುತ್ತೆ. ಅದೇ ಧೈರ್ಯದ ಮೇಲೆ ನಯನ ಭಟ್ ಜಿ.ಎಸ್❣️ ಅವರ ಗಝಲ್ ಗೆ ತರಹೀ ಬರೆಯುವ ಸಾಹಸಕ್ಕೆ ಕೈ ಹಾಕಿದ್ದು. ಸಮಯದ ಅಭಾವದಿಂದ ನಿಮ್ಮೆಲ್ಲರ ಬರಹಗಳನ್ನು ಓದಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಕ್ಷಮೆಯಿರಲಿ. ನಿಮ್ಮೆಲ್ಲರ ಪರಿಶ್ರಮಕ್ಕೆ, ಕಲಾ ಸೇವೆಗೆ ನನ್ನ ಮೆಚ್ಚುಗೆ, ಹಾರೈಕೆಗಳು ಸದಾ ಇರುತ್ತವೆ.
ಎಸಕ : ಕಾಂತಿ, ಸೊಬಗು, ವೈಭವ, ಪ್ರತಾಪ ತರಹೀ ಎನ್ನುವ ಶೀರ್ಷಿಕೆಯನ್ನೇನೋ ಕೊಟ್ಟಿದ್ದೇನೆ. ಆದ್ರೆ ಮೂಲ ಬರಹದ ತರಹ ಇದೆ ಎನ್ನುವ ಖಾತರಿಯಿಲ್ಲ. ಆತ್ಮೀಯತೆಯಿದ್ದಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮನ್ನಿಸುವ ಹೃದಯ ವೈಶಾಲ್ಯತೆ ಕೂಡ ಇರುತ್ತೆ. ಅದೇ ಧೈರ್ಯದ ಮೇಲೆ ನಯನ ಭಟ್ ಜಿ.ಎಸ್❣️ ಅವರ ಗಝಲ್ ಗೆ ತರಹೀ ಬರೆಯುವ ಸಾಹಸಕ್ಕೆ ಕೈ ಹಾಕಿದ್ದು. ಸಮಯದ ಅಭಾವದಿಂದ ನಿಮ್ಮೆಲ್ಲರ ಬರಹಗಳನ್ನು ಓದಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಕ್ಷಮೆಯಿರಲಿ. ನಿಮ್ಮೆಲ್ಲರ ಪರಿಶ್ರಮಕ್ಕೆ, ಕಲಾ ಸೇವೆಗೆ ನನ್ನ ಮೆಚ್ಚುಗೆ, ಹಾರೈಕೆಗಳು ಸದಾ ಇರುತ್ತವೆ. #kvprakashquotes #ವಿಜಯ್_ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್
read moreವಿಜಯ್
ತರಹೀ ಗಝಲ್: ಚೇತನಾ ಅವರ ಊಲಾ ಮಿಸ್ರ ********************************* ರಕ್ತ ಚರಿತ್ರೆಯಲಿ ಅನುರಕ್ತನಾಗಿಹ ಮನುಜಗೆ ಎಲ್ಲಿದೆ ಮಾನವೀಯತೆ ಸುಪ್ತ ಮನದಲೂ ವಿಷವ ಬೆರೆಸಿಹ ಮನುಜಗೆ ಎಲ್ಲಿದೆ ಮಾನವೀಯತೆ ನಿರ್ಭೀತಿಯಿಂದ ಮೆರೆಯುತಿರುವರು ಮನುಜ ಮುಖವಿರಿಸಿದ ರಕ್ಕಸರು ಹಸುಳೆಯನೂ ಬಿಡದೆ ಪೀಡಿಸುತಿಹ ಮನುಜಗೆ ಎಲ್ಲಿದೆ ಮಾನವೀಯತೆ ಉಸಿರು ಬಿಗಿಹಿಡಿದು ಕಾಯುತ್ತಿವೆ ಹಿರಿಜೀವಗಳು ಅನಾಥ ಮಂದಿರದಲ್ಲಿ ಸಂಬಂಧಗಳ ಆಳವನು ತಿಳಿಯದಿಹ ಮನುಜಗೆ ಎಲ್ಲಿದೆ ಮಾನವೀಯತೆ ಮತಗಳ ನಡುವೆ ಧ್ವೇಷವನು ಬಿತ್ತಿ ಸ್ವಾಸ್ಥ್ಯ ಕದಡುತಿರುವ ಮತಿಹೀನರು ವನ್ಯ ಜೀವಿಗಳ ತೆರದಿ ವರ್ತಿಸುತಿಹ ಮನುಜಗೆ ಎಲ್ಲಿದೆ ಮಾನವೀಯತೆ ಅಂಧ ಶ್ರದ್ದೆಯಲಿ ಅಸುವ ತೆಗೆದು ವಿಕೃತಿ ಮೆರೆಯುವುದಲ್ಲ "ವಿಜಯ" ಭ್ರಮೆಯ ನಾಕದ ಸೃಷ್ಟಿಗೆ ಹೊರಟಿಹ ಮನುಜಗೆ ಎಲ್ಲಿದೆ ಮಾನವೀಯತೆ Chetu Hegde ಅವರೇ, ನಿನ್ನೆ ಮೊನ್ನೆಯಷ್ಟೇ ಪುಟ್ಟ ಪ್ರಯತ್ನ ಅಂತ ಗಝಲ್ ಲೋಕಕ್ಕೆ ಎಂಟ್ರಿ ಕೊಟ್ಟವರು ಪಟ ಪಟನೆ ಬರೆಯುತ್ತಾ ಸಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.😍 ನಿಮ್ಮ ಒಂದು ಪ್ರೌಢ ಗಂಭೀರವಾದ ಗಝಲ್ ಗೆ ಸರಳವಾದ ಪದಗಳ ಮೂಲಕ ತರಹೀ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಅಷ್ಟಕ್ಕೂ ನಿಮ್ಮ ಗಝಲ್ ಓದಿದ್ದೇ ತರಹೀ ಬರೆದಾದ್ಮೇಲೆ ಅದೇ ತರಹ ಇದೆಯಾ ಅಂತ ತುಲನೆ ಮಾಡುವುದಕ್ಕೆ...😁 ಹಾ... ನಯನ ಭಟ್ ಜಿ.ಎಸ್❣️ ಅವರು ಬರೆದ ತರಹೀ ಓದಿದಾಗ, ನನ್ನಂತಹ ಜನ ಸಾಮಾನ್ಯನಿಗೆ ಎಟುಕದ ಪದಗಳನ್ನು ಬಳಸದೆ ಬರೆದು ಬಿಡಬೇಕು ಎನ್ನುವ ಆಲೋಚನೆ ಬಂತು..😊
Chetu Hegde ಅವರೇ, ನಿನ್ನೆ ಮೊನ್ನೆಯಷ್ಟೇ ಪುಟ್ಟ ಪ್ರಯತ್ನ ಅಂತ ಗಝಲ್ ಲೋಕಕ್ಕೆ ಎಂಟ್ರಿ ಕೊಟ್ಟವರು ಪಟ ಪಟನೆ ಬರೆಯುತ್ತಾ ಸಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.😍 ನಿಮ್ಮ ಒಂದು ಪ್ರೌಢ ಗಂಭೀರವಾದ ಗಝಲ್ ಗೆ ಸರಳವಾದ ಪದಗಳ ಮೂಲಕ ತರಹೀ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಅಷ್ಟಕ್ಕೂ ನಿಮ್ಮ ಗಝಲ್ ಓದಿದ್ದೇ ತರಹೀ ಬರೆದಾದ್ಮೇಲೆ ಅದೇ ತರಹ ಇದೆಯಾ ಅಂತ ತುಲನೆ ಮಾಡುವುದಕ್ಕೆ...😁 ಹಾ... ನಯನ ಭಟ್ ಜಿ.ಎಸ್❣️ ಅವರು ಬರೆದ ತರಹೀ ಓದಿದಾಗ, ನನ್ನಂತಹ ಜನ ಸಾಮಾನ್ಯನಿಗೆ ಎಟುಕದ ಪದಗಳನ್ನು ಬಳಸದೆ ಬರೆದು ಬಿಡಬೇಕು ಎನ್ನುವ ಆಲೋಚನೆ ಬಂತು..😊 #kvprakashquotes #ವಿಜಯ್_ಗಝಲ್ #ಕನ್ನಡ_ಗಜಲ್ #ತರಹೀ_ಗಝಲ್
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited